ಕರ್ನಾಟಕದ ರಾಷ್ಟ್ರೀಯ ಉದ್ಯಾನಗಳು
ಕರ್ನಾಟಕವು ದಟ್ಟವಾದ ಅರಣ್ಯಗಳನ್ನು ಹೊಂದಿದ್ದು ಅವುಗಳಲ್ಲಿ ವಿವಿಧ ಬಗೆಯ ವನ್ಯಜೀವಿಗಳನ್ನು ನಾವು ಕಾಣಬಹುದಾಗಿದೆ. ಸರ್ಕಾರ ಇವುಗಳ ರಕ್ಷಣೆಗಾಗಿ ಪಕ್ಷಿಧಾಮಗಳು, ಹುಲಿಧಾಮಗಳು, ರಾಷ್ಟ್ರೀಯ ಉದ್ಯಾನಗಳನ್ನು ನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ ’ಐದು’ ರಾಷ್ಟ್ರೀಯ ಉದ್ಯಾನಗಳನ್ನು ನಾವು ಕಾಣಬಹುದಾಗಿದೆ. ಅವುಗಳೆಂದರೆ:-
ಹೆಸರು ಸ್ಥಾಪಿತವಾದ ವರ್ಷ ವಿಸ್ತೀರ್ಣ ಜಿಲ್ಲೆಗಳು
೧. ನಾಗರಹೊಳೆಯ ’ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ’ ೧೯೮೮ ೬೪೦ ಕೊಡಗು
೨. ಬಂಡೀಪುರ ರಾಷ್ಟ್ರೀಯ ಉದ್ಯಾನವನ ೧೯೭೪ ೮೭೪ ಚಾಮರಾಜನಗರ
೩. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ೧೯೭೪ ೧೦೪ ಬೆಂಗಳೂರು ಗ್ರಾಮಾಂತರ
೪. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ೧೯೮೭ ೬೦೦.೩೨ ಚಿಕ್ಕಮಗಳೂರು
೫.ಅನ್ಷಿ ರಾಷ್ಟ್ರೀಯ ಉದ್ಯಾನವನ ೧೯೮೭ ೨೫೦ ಉತ್ತರ ಕನ್ನಡ
ಪ್ರಾಣಿಗಳನ್ನು ಸಂರಕ್ಷಿಸಲು ರಾಜ್ಯದಲ್ಲಿ ಹದಿನೆಂಟು ವನ್ಯಜೀವಿಧಾಮಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:- ಮುತ್ತೋಡಿ, ಬಂಡೀಪುರ, ನಾಗರಹೊಳೆ, ದಾಂಡೇಲಿ,ಭದ್ರಾ ವನ್ಯಜೀವಿಧಾಮ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು, ಮಂಡಗದ್ದೆ, ಗುಡವಿ ಪಕ್ಷಧಾಮ ಇತ್ಯಾದಿ.
Tuesday, 14 April 2015
Subscribe to:
Post Comments (Atom)
0 comments:
Post a Comment